Posts

ತಮ್ಮ ಬಳಿ ಏನಿದೆ ಎಂಬುದರ ಅರಿವಿರುವುದಿಲ್ಲ ಅದು ಕಳೆಯುವ ತನಕ

ಎಲ್ಲ ಇದ್ದವರಿಗೆ ತಮ್ಮ ಬಳಿ ಏನಿದೆ ಎಂಬುದರ ಅರಿವಿರುವುದಿಲ್ಲ. ನನ್ನ ಗೆಳತಿ ಮೊದಲು ಯಾವಗಲು ತುಂಬ busy ಆದರೆ ಮಗುವಾಗುವಾದ ಮೇಲೆ  ಕೆಲಸಬಿಟ್ಟಳು ಆಗ ಅವಳಿಗೆ ತಿಳಿಯಿತು ಸುಮ್ಮನೆ ಕುರುವುದು ಕಷ್ಟ ಎಂದು. ಮೊದಮೊದಲಿಗೆ ಅವಳಿಗೆ ತುಂಬ ಬೆಸರ ಕಾಡುತ್ತಿತ್ತು. ಮಗು ಹಾಗು ಸಂಸಾರಕ್ಕಾಗಿ ಕೆಲಸ ಬಿಡಬಾರದಿತ್ತೆಂದು ಕೋರಗುತ್ತಿದ್ದಳು. ಮತ್ತೆ ಕೆಲಸಕ್ಕೆ ಸೆರಿದಳು ಅದರೆ ಮಗುವಿನ ನೆನಪು ಕಾಡತೊಡಗಿತು ಮತ್ತೆ ಮೊದಲಿನಂತೆ ಕೆಲಸಮಾಡಲಗಲಿಲ್ಲ. ಯಾವ ಕೆಲಸದಲ್ಲು ಒಂದು ತಿಂಗಳು ಕೂಡ ಇರಲಿಲ್ಲ. ಓಮ್ಮೆ ನಾವು ಮಾತಾಡುವಾಗ ನಾನು ನನ್ನ ಬೇರೆ ಗೆಳತಿಯರು ಹೇಳಿದೆವು ನೀನು ಮೊದಲು ನಿನ್ನ ಬಳಿ ಇರುವುದನ್ನು ಖುಷಿಪಡು. ಮಗುವಿನ ಬಳಿ ಇರಲು ಎಷ್ಟೋ ತಾಯಂದಿರು ಬಯಸುತ್ತಾರೆ. ನಿನ್ನ ಮನಸ್ಸಿಗೆ ಏನು ಮುಖ್ಯ ನಿರ್ಧರಿಸು. ನಮ್ಮ ಮನಸ್ಸು ಎಷ್ಟೂ ವಿಚಿತ್ರಾ ಹಾಗು ಚಂಚಲ ಅಲ್ವ? ಎಲ್ಲ ಇದ್ದವರಿಗೆ ತಮ್ಮ ಬಳಿ ಏನಿದೆ ಎಂಬುದರ ಅರಿವಿರುವುದಿಲ್ಲ. ಒಂದು ಬಾರಿಕಳೆದು ಕೊಂಡವರಿಗೆ ಗೊತ್ತು ಅದರ ಮಹತ್ವ. ತಾಯಿಯ ಪ್ರೀತಿ ಸಿಗದ ಮಗುವಿಗೆ ಬೇರೆಯವರು ತಮ್ಮ ಮಕ್ಕಳನ್ನು ಪ್ರಿತಿಸುತ್ತಿದ್ದಾಗ ಏನೊ ಒಂದು ತಳಮಳ. ಅದೆ ತಾಯಿಯಪ್ರೀತಿ ಕೆಲವರಿಗೆ ಅತಿರೇಕ. ಮಗುವಿಲ್ಲದವರಿಗೆ ಗೊತ್ತು ಮಕ್ಕಳಿಲ್ಲದ ಬದುಕು ಏನೆಂದು ಮಗುವದಾವರಿಗೆ ಮಕ್ಕಳು ಯಾಕೆಂದು 😃 ಒಂಟಿ ಯಾಗಿ ಇರುವವರಿಗೆ ಇನ್ನು ತನಗೆ ಜೊತೆಇಲ್ಲ ಎಂಬ ಸಂಕಟ ಜೊತೆ ಇರುವವರಿಗೆ ಏನೊ ಸಂಕಟ. ಅತ್ತೆ ಇಲ್ಲದ...

Long Long ago

Long long ago there was a beautiful forest. All the wild animals were living happily in that forest. one day a man entered and started living with his family. First he started hunting for his livelihood animals, begged him no use later he started to cut trees to build a beautiful and big banglo. Trees were crying family didn't bother, Day by Day he and his family occupied that forest. Greed increased some other people joined they made the forest become beautiful city. After few years city flooded. people begged God , God smiled and said I gave you heaven u made it hell. Our greed is resulting in earthquake, flood natural disasters. Next generation will not get green forest, animal treasures, good air to breath , water. We are responsible for all these adverse effects in nature. This is my first small effort to write in English though am not good in writing.

ಕೆಟ್ಟಚಟ ವಿದ್ದವರೆಲ್ಲ ಕೆಟ್ಟವರಲ್ಲ

ಅಫಿಸ್ ನಲ್ಲಿ ಕೆಲಸ ಮಾಡುವಾಗ ಮೊದಮೊದಲಿಗೆ ತುಂಬ ಮಾಡ್ರನ್ ಜನಗಳೂಂದಿಗೆ ಮಾತಡುವುದು ಕಷ್ಟವಾಗುತ್ತಿತ್ತು.ನನ್ನ ಉಡುಗೆ ಬೇರೆ ಹುಡುಗಿಯರ ತೊಡುಗೆ ಬಹಳ ವಿಭಿನ್ನ. ನನ್ನ ಅನಿಸಿಕೆಯಲ್ಲಿ ನಾನು ಅವರ ವಿಚಾರಗಳ ರೀತಿ ಭಿನ್ನ ವಾಗಿದೆ ಎಂದು ತಿಳಿದು ಸ್ವಲ್ಪ ದೂರವೆ ಯಿರುತ್ತಿದ್ದೆ. ಓಮ್ಮೆ ಅಫಿಸಿಗೆ ಹೊಸ ಹುಡುಗಿ ಸೇರಿದಳು ಅವಳಬಗ್ಗೆ ಸ್ವಲ್ಪ ದಿನದ ನಂತರ ಏನೊ ಗುಸು ಗುಸು. ಸಿಗರೇಟ್ , ಕುಡಿತ ಎಲ್ಲ ಇದೆ ಅವಳು ತನ್ನ ಕುಟುಂಬದ ಜೊತೆ ಇಲ್ಲ ಎಂಬ ಸುದ್ದಿಗಳು. ನೊಡಲು ಸಣ್ಣ ಹುಡುಗಿಯಂತಿದ್ದಳು. ನಾನು ಅಕೌಂಟೆಂಟ್ ಅದ್ದರಿಂದ ಹೊಸದಾಗಿ ಕೆಲಸಕ್ಕೆ ಸೇರಿದವರು ಸಂಭಳದ ಬಗ್ಗೆ ಕೆಳಲು ಯಾವಗಲು ಬರುತ್ತಾರೆ. ಮೊದಲು ಈ ಹುಡುಗಿ ಹಾಗೆ ಪರಿಚಯವಾದಳು. ನನ್ನ ಅಫಿಸಿನ ಕ್ಯಾಬ್ ನಲ್ಲಿ ಬರುತ್ತಿದ್ದಳು. ನಾನು ಜಾಸ್ತಿ ಮಾತಾಡು ತ್ತಿರಲಿಲ್ಲ. ಓಮ್ಮೆ ಹೀಗೆ ಮಾತಾಡುವಾಗ ತಿಳಿಯಿತು ಅವಳು ತುಂಬ ಒಳ್ಳೆ ಹುಡುಗಿ ಬದುಕಿನಲ್ಲಿ ನಡೆದ ಯಾವುದೊ ಕಹಿ ಘಟನೆ ಆಕೆಯಲ್ಲಿ ಕೆಟ್ಟ ಚಟಗಳನ್ನು ರೂಢಿಮಾಡಿವೆ. ಅ ಹುಡುಗಿ ಎಷ್ಟು ಮುಗ್ಧೆ ಎಲ್ಲರನ್ನು ತನ್ನವರಂತೆ ಕಾಣುತ್ತಿದ್ದಳು. ಯಾರು ಏನು ಹೇಳಿದರು ತಲೆಕೆಡಸಿಕೊಳ್ಳದ ಗುಣ. ನಮ್ಮ ಅಫಿಸ್ನ ಸೆಕ್ಯುರಿಟಿ ಮಕ್ಕಳಿಗೆ ತನ್ನ ದುಡಿಮೆಯ ಒಂದು ಭಾಗ ಕೊಡುತ್ತೀದ್ದಳು. ನನಗೆ ಅವಳ ಮೇಲಿದ್ದ ಅನಿಸಿಕೆ ಬದಲಾಯಿತು.

ತೂಕದ ವಿಷಯ 😂

ತೂಕದ ವಿಷಯ ಮಹಿಳೆಯರು ಬಹಳ ಚಿಂತಿಸುವ ಸಂಗತಿ ಅದು ಮಕ್ಕಳಾದ ಮೇಲೆ ಹೆಚ್ಚುವ ತೂಕ! ಅದರಲ್ಲು ಮುಂಚೆ ಸಣ್ಣಗಿದ್ದವರು ಅಮೇಲೆ ದಪ್ಪಾ ಅದರೆ ಅವರಿಗೆ ಗೊತ್ತು ಬಿಡಿ ಅದರ ಯಾತನೆ. ತುಂಬ ಜನ ಮಗುವಾದ ಸ್ವಲ್ಪ ತಿಂಗಳ ನಂತರ ಮೊದಲು ಹೆರ್ ಸ್ಟೇಲ್ ಬದಲಿಸುತ್ತೇವೆ ನಾನು ಕೂಡ ಅದರ ವರತಲ್ಲ. ಯಾರು ಸಿಕ್ಕಿದರು ಮೊದಲು ಹೇಳುವುದು ಓ ಏಸ್ಟು ದಪ್ಪ ಅಗಿಯಲ್ಲ .😂 ಇದು ಸಿನಿಮಾ ತಾರೆಯರನ್ನು ಬಿಟ್ಟಿಲ್ಲ. ಸಣ್ಣ ಆಗಲು ಕಸರತ್ತು ಶುರುಮಾಡುತ್ತೆವೆ.ಮನೆ ಮದ್ದಿನಿಂದ ಜಿಮ್ ಸೇರುವತನಕ. 😃

ಇಂಗ್ಲಿಷ್ ಎಂಬ ಭೂತ ಕನ್ನಡವ ನುಂಗಿತ್ತು

ಮೊನ್ನೆ ಮಗಳಿಗೆ ಕನ್ನಡ ಕಲಿಸುವಾಗ ನಮ್ಮ ಮನೆ ಸ್ವಚ್ಚ ಮಾಡುವಾಕೆ ಹೇಳಿದಳು ಅಮ್ಮ ನಾನು ಕೆಲಸಮಾಡುವುದು ಕನ್ನಡ ಜನರ ಮನೆಯಲ್ಲಿ ಅದರೆ ಅವರ ಮನೆಯಲ್ಲಿ ಯಾರು ಕನ್ನಡ ಮಾತಾಡಲ್ಲ ಬೆಂಗಳೂರಲ್ಲಿ ಕನ್ನಡ ಜನ ಯಾಕೆ ಮನೆಲ್ಲಿ ಇಂಗ್ಲಿಷ್ ಮಾತಾಡುತ್ತಾರೆ? ನಾನು ಕನ್ನಡ ಪಾಠಮಾಡುತ್ತೇನೆ ನನ್ನ ಹತ್ತಿರ ಕನ್ನಡವರ ಮಕ್ಕಳು ಬರುತ್ತಾರೆ ಅದರೆ ಅವರಿಗೆ ಕನ್ನಡ ಬರಲ್ಲ. ಅವ್ರು ಕನ್ನಡ ಸಿನಿಮಾನೊಡಲ್ಲಂತೆ. ತಮಿಳ್ ,ತೆಲುಗು, ಹಿಂದಿ ,ಮಲಾಯಳಮ್ ಎಲ್ಲರು ಅವರ ಮಾತ್ರುಭಾಷೆ ಮಾತಾಡುತ್ತಾರೆ ಅದರೆ ನಾವು ಮಾತ್ರ ಎಲ್ಲಾ ಮರೆಯುತ್ತೀದ್ದೆವಿ. ಗಂಡ , ಹೆಂಡತಿ, ಮಕ್ಕಳು ಎಲ್ಲಾರು ಇಂಗ್ಲಿಷ್ ನಲ್ಲಿ ಮಾತಾಡುವುದು ಯಾಕೆ ಗೊತ್ತಿಲ್ಲ. ಆದರೆ ಇದು ಒಳ್ಳೆಯದಂತು ಅಲ್ಲ.

Life without relations -ಬಂಧುಗಳು ಬಂಧಗಳು

ಹಿರಿಯಜೀವ ವಿಲ್ಲದ ಜೀವನ ಮರವಿಲ್ಲದ ಕಾಡಿನಂತೆ. ಮಕ್ಕಳಿಗೆ ತನ್ನವರು ಎಂಬ ಭಾವನೆಗಳು ದೂರಗುತ್ತಿದೆ. ಬಂಧುಗಳು ಬಂಧಗಳು ಇಲ್ಲ.ತನ್ನ ಅಜ್ಜಿ ತಾತನ ಹೆಸರು ಗೊತ್ತಿಲ್ಲ ಎಲ್ಲಿದ್ದರೆ ಹೇಗಿದ್ದಾರೆ ತನ್ನವರು ಎಂಬುದು ಕೂಡ ತಿಳಿಯಾದಾಗಿದೆ. ಕಿರಿಯರು ಹಿರಿಯರು ಕೂಡಿಬಾಳಿದರೆ ಬದುಕು ಸುಂದರ ಸ್ವರ್ಗ.

Home remedy- for weight loss -ತೂಕ ಕಡಿಮೆಯಾಗಲು

 ತೂಕ ಕಡಿಮೆಯಾಗಲು ಜೀರಿಗೆ, ಅಗಸೆ ಬೀಜ , ಕರಿಬೇವು  ಮತ್ತು ಸೊಂಪು ಇದನ್ನು ಬಿಸಿ ಮಾಡಿ ಪುಡಿ ಮಾಡಿಕೋಂಡು ರಾತ್ರೆ ಮಾಲಗುವ ಮೊದಲು ಅರ್ಧ ಚಮಚ ತಿನ್ನಿರಿ. ನಂತರ ಬಿಸಿ  ನೀರು ಕುಡಿಯಿರಿ. 3 ತಿಂಗಳು ಇದನ್ನು ಮಾಡಿ ನೊಡಿ ತೂಕ ಖಂಡಿತ ಕಡಿಮೆಯಾಗುತ್ತದೆ. Weight loss home remedy Take equal quantity of jeera,   curry leaves,flax  seeds, fennel seeds fry it and grind it make a fine powder mix it. Take this powder 1/2 a spoon daily before going to bed. Also drink hot water.  Try this 3 month definitely you will lose the weight .